Error message
- Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
- Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
- Notice: Trying to access array offset on value of type int in element_children() (line 6422 of /home4/mipampao/public_html/akkaonline/2014/includes/common.inc).
- Deprecated function: The each() function is deprecated. This message will be suppressed on further calls in _menu_load_objects() (line 569 of /home4/mipampao/public_html/akkaonline/2014/includes/menu.inc).
- Deprecated function: implode(): Passing glue string after array is deprecated. Swap the parameters in drupal_get_feeds() (line 394 of /home4/mipampao/public_html/akkaonline/2014/includes/common.inc).
ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಸಹಯೋಗದೊಂದಿಗೆ ಅಮೇರಿಕಾ ಕನ್ನಡ ಕೂಟಗಳ ಆಗರ (ಅಕ್ಕ) ೮ನೇ ವಿಶ್ವ ಕನ್ನಡ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲು ಸಜ್ಜಾಗುತ್ತಿದೆ. ಈ ಸಮ್ಮೇಳನ ಅಂಗವಾಗಿ ಕನ್ನಡ ಸಾಹಿತ್ಯದ ಸಮೃದ್ಧಿ, ಉತ್ಕೃಷ್ಟತೆ ಮತ್ತು ವೈವಿಧ್ಯತೆಗಳನ್ನು ಪರಿಚಯಿಸಿ ಪ್ರದರ್ಶಿಸಲು ಸಾಹಿತ್ಯ ವೇದಿಕೆ ಸಿದ್ಧವಾಗುತ್ತಿದೆ. ಪ್ರಸ್ತುತ ಸಾಹಿತ್ಯ ವೇದಿಕೆಯ ಕಾರ್ಯ ಚಟುವಟಿಕೆಗಳು ಎರಡು ಆಯಾಮಗಳಲ್ಲಿ ನಡೆಯಿತ್ತಿವೆ.
ಸಮ್ಮೇಳನದ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳು![]() |
---|
ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಈ ಕೆಳಕಂಡ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ: ಅ. ಕನ್ನಡದ ಉದ್ದಾಮ ಸಾಹಿತಿಯೊಬ್ಬರನ್ನು ಸಮ್ಮೇಳನಕ್ಕೆ ಆಹ್ವಾನಿಸಿ, ಅವರಿಂದ ಒಂದು ಪ್ರಧಾನ ಭಾಷಣವನ್ನು ಪ್ರಸ್ತುತಪಡಿಸುವುದು. (ನಿರ್ದಿಷ್ಟ, ನವೀನ ಮತ್ತು ಹೆಚ್ಚಿನ ವಿವರಗಳಿಗಾಗಿ, ಇಲ್ಲಿಗೆ ಮತ್ತೆ ಬನ್ನಿ!) KAN101 KAN102
KAN103 KAN104 KAN105 |
ಪುಸ್ತಕ ಪ್ರಕಾಶನ |
---|
೨೦೧೪ ರ ವಿಶ್ವ ಕನ್ನಡ ಸಮ್ಮೇಳನದಲ್ಲಿ ಎರಡು ಸಾಹಿತ್ಯಿಕ ಕೃತಿಗಳನ್ನು ರಚಿಸಿ, ಪ್ರಕಟಿಸಲು ಸಾಹಿತ್ಯ ವೇದಿಕೆ ಮುಂದಾಗಿದೆ. ಕನ್ನಡದ ಜನಪ್ರಿಯ ಪ್ರಕಾರಗಳನ್ನು ಹೊಸ ಸೊಗಡಿನೊಂದಿಗೆ ಸಾಹಿತ್ಯಾಸಕ್ತರ ಕೈಯಲ್ಲಿರಿಸುವುದೇ ಇದರ ಉದ್ದೇಶ. ಸಾಹಿತ್ಯ ರಸಿಕರು ಇವುಗಳನ್ನು ಓದಿ, ಆ ನೆನಪುಗಳನ್ನು ತಮ್ಮ ಚಿರಸ್ಮರಣೀಯ ನೆನಪುಗಳ ಭಂಡಾರದಲ್ಲಿ ಕಾಪಾಡಬೇಕೆಂಬುದು ನಮ್ಮ ಆಶಯ. ಹೀಗಾಗಿ ನಾವು ಈ ಕೆಳಕಂಡ ಎರಡು ಪ್ರಕಾರಗಳನ್ನು ಅಯ್ಕೆ ಮಾಡಿಕೊಂಡಿದ್ದೇವೆ.
ಅ. ಸಣ್ಣ ಕಥಾ ಸಂಕಲನಕನ್ನಡದ ಸಮಕಾಲೀನ ಶ್ರೇಷ್ಠ ಕಥೆಗಾರರನ್ನು ಆಹ್ವಾನಿಸಿ, ಅವರುಗಳಿಂದ ಒಂದೊಂದು ಸಣ್ಣ ಕಥೆಯನ್ನು ಬರೆಯುವಂತೆ ಈಗಾಗಲೇ ವಿನಂತಿಸಿಕೊಂಡಿದ್ದೇವೆ. ಅವರುಗಳು ತಮ್ಮ ಕಥೆಗಳನ್ನು ನಮಗೆ ಸಲ್ಲಿಸಿದ ನಂತರ, ನಮ್ಮ ಸಾಹಿತ್ಯಿಕ ಸಮಿತಿಯ ಸಂಪಾದಕ ಮಂಡಳಿ ಅವುಗಳನ್ನು ಪರಿಷ್ಕರಿಸಿ, ಒಂದು ಸಣ್ಣ ಕಥಾ ಸಂಕಲನವನ್ನು ಸಿದ್ಧಗೊಳಿಸಿ, ಸಮ್ಮೇಳನದಲ್ಲಿ ಬಿಡುಗಡೆ ಮಾಡಲು ಆಯೋಜಿಸಲಾಗಿದೆ. ಬ. ಲಲಿತ ಪ್ರಬಂಧ ಸಂಪುಟಪ್ರಸ್ತುತ ಕನ್ನಡದ ಸಮಕಾಲೀನ ಶ್ರೇಷ್ಠ ಪ್ರಬಂಧಕಾರರನ್ನು ಗುರುತಿಸಿ, ಅವರುಗಳಿಂದ ಲಲಿತ ಪ್ರಬಂಧ (ಅಥವಾ ಹರಟೆ) ಲೇಖನವನ್ನು ನಮಗೆ ರಚಿಸಿ ಕೊಡಬೇಕೆಂದು ಈಗಾಗಲೇ ಪ್ರಾರ್ಥಿಸಿಕೊಂಡಿದ್ದೇವೆ. ಅವರುಗಳಿಂದ ಸಲ್ಲಿಸಲ್ಪಟ್ಟ ಲೇಖನಗಳನ್ನು ಒಟ್ಟುಗೂಡಿಸಿ, ಒಂದು ಲಲಿತ ಪ್ರಬಂಧ ಸಂಪುಟವನ್ನು ರಚಿಸಲಾಗುವುದು. ಈ ಪುಸ್ತಕವನ್ನು ಮುದ್ರಿಸಿ, ಅದನ್ನೂ ಸಹ ಸಮ್ಮೇಳನದಲ್ಲಿ ಲೋಕಾರ್ಪಣೆ ಮಾಡಲಾಗುವುದು. |
ಸಮಿತಿಯ ಸದಸ್ಯರು |
---|
|